ರೋಜಾ ಸೂಪರ್ ಫಿಲಂಸ್ ಲಾಂಛನದಡಿಯಲ್ಲಿ ಜಿ. ಕೃಷ್ಣಮೂರ್ತಿ ನಿರ್ಮಿಸುತ್ತಿರುವ ವಿಶೇಷ ಚಿತ್ರದ ಪ್ರಥಮ ಹಂತದಚಿತ್ರೀಕರಣವುಯಾವುದೇ ಸದ್ದುಗದ್ದಲವಿಲ್ಲದೆ ಮುಕ್ತಾಯಗೊಂಡಿತು.
ಹದಿನೈದು ದಿವಸಗಳ ಕಾಲ ನಡೆದಚಿತ್ರದಚಿತ್ರೀಕರಣದಲ್ಲಿ
ಕಣ್ಮುಂದೆ ಬಂದೆ ನೀನು ಹೋದಜೀವ ಮತ್ತೆ ಬಂದಂತೆ
ನಿಂತಲ್ಲೇ ನಿಂತೇ ನಾನು ಹೆಚ್ಚು ಹಮ್ಮಿ ಹುಚ್ಚನಾದಂತೆ
ಎಂಬ ಗೀತೆಯನ್ನು ಪ್ರಶಾಂತ್ ಐಗಾಳ್, ನಮ್ರತಾ ಶರ್ಮ ಮೇಲೆ ರಾಮು ನಿರ್ದೇಶನದೊಂದಿಗೆಆರ್.ಗಿರಿಧಾಯಾಗ್ರಹಣದಲ್ಲಿ ನಿರ್ದೇಶಕ ಪ್ರಶಾಂತ್ ಸೂರ್ಯ ಚಿತ್ರಿಸಿಕೊಂಡರು.
ಚಿತ್ರದ ದ್ವಿತೀಯ ಹಂತದಚಿತ್ರೀಕರಣವುಡಿಸೆಂಬರ್ ೨ ರಿಂದ ನಗರದಲ್ಲಿ ಮುಂದುವರೆಯಲಿದೆಎಂದು ನಿರ್ಮಾಪಕಕೃಷ್ಣಮೂರ್ತಿ ತಿಳಿಸಿದ್ದಾರೆ.
ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್, ಮನೀಶ್ ಸಂಭಾಷಣೆ, ಆರ್.ಗಿರಿಛಾಯಾಗ್ರಹಣಕವಿರಾಜ್, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಸಾಹಿತ್ಯ, ಎಸ್. ನಾಗು ಸಂಗೀತ, ಮಾಸ್ ಮಾದು ಸಾಹಸ, ರಾಮು ನೃತ್ಯ, ತಿರುಪತಿರೆಡ್ಡಿ ಸಂಕಲನ, ಥಾಮಸ್ ನಿರ್ಮಾಣ ಮೇಲ್ವಿಚಾರಣೆಯಿದ್ದು, ಎಸ್.ವಿ. ರಾಜೇಂದ್ರಸಿಂಗ್ಬಾಬು ರವರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಪ್ರಶಾಂತ್ ಸೂರ್ಯ ಈ ಚಿತ್ರದಕಥೆಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಈ ಹಿಂದೆಎರಡು ಲಂಬಾಣಿ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಪ್ರಶಾಂತ್ ಐಗಾಳ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇವರೊಂದಿಗೆ ನಮ್ರತಾ ಶರ್ಮ, ಕಾಶಿನಾಥ್, ಶೋಭರಾಜ್, ಮಂಡ್ಯರಮೇಶ್, ರಮೇಶ್ಭಟ್, ರಾಮಕೃಷ್ಣ, ಸುಧಾಕರ್, ಅರಸು, ಮಂಜುನಾಥ ಪ್ರೇಮ್, ಕೋಟೆ ಪ್ರಭಾಕರ್ ಬ್ಯಾಂಕ್ಜನಾರ್ಧನ್ಉಮೇಶ್ ಮುಂತಾದವರಿದ್ದಾರೆ.